ಕುಳಿತು ಈ
ಊರಲ್ಲಿ...
ಏನೆಂದು ನಾ
ಬರೆಯಲಿ....
ಹಚ್ಚ ಹಸಿರು
ಮರಗಳಿಲ್ಲ ಇಲ್ಲಿ...
ಕಟ್ಟಡಗಳೇ
ಬೆಳೆಯುತಿಹುದಿಲ್ಲಿ...
ಮರ-ಗಿಡಗಳು
ಬೆಳೆಯಲು ಜಾಗವೆಲ್ಲಿ...
ಹೀಗೆಯೇ
ಮುಂದುವರಿದಲ್ಲಿ...
ಪರಿಣಾಮವ
ಮಾನವನೇ ಅನುಭವಿಸಲಿ...
ಸಂಪೂರ್ಣ
ಮರೆಯಾದಾಗ ಹಸಿರು...
ನಿಲ್ಲುವುದು
ಮಾನವನ ಉಸಿರು...
ಎಷ್ಟೇ ಬಾಯಾರಿಕೆಯಾದರೂ...
ಕುಡಿಯಲು ಸಿಗದು
ತೊಟ್ಟು ನೀರು...
ತಿನ್ನಲು ಸಿಗದು
ಆಹಾರ...
ಎಲ್ಲೆಡೆ
ಏಳುವುದು ಹಾಹಾಕಾರ...
ವಿಜ್ಞಾನಿಗಳು
ನಡೆಸುತ್ತಿಹರು ಸಂಶೋಧನೆ...
ಏನೇ ಆದರೂ, ಮೂಲ
ಪ್ರಕೃತಿ ತಾನೇ?...
ಕಂಡರೂ ಎಷ್ಟೇ ಬೆಳವಣಿಗೆ...
ಗೆಲ್ಲಲಾಗಲಿಲ್ಲ ಈವರೆಗೆ ...
ಅತಿಯಾಸೆ ಈ ಮಾನವಗೆ...
ಮಿತಿಯಿಲ್ಲ ಆ ಅತಿಯಾಸೆಗೆ...
ಭೇದಿಸ ಹೊರಟರೆ ಪ್ರಕೃತಿಯ ರಹಸ್ಯ...
ಖಂಡಿತ ಸರ್ವನಾಶವಾಗುವ ಈ ಮನುಷ್ಯ...
ಇಂತಿ,
ನಾಗೇಶ್ ... :)