Monday 28 July 2014

> ಆಧುನಿಕ ಜಗತ್ತು - 2


ಕುಳಿತು ಈ ಊರಲ್ಲಿ...
ಏನೆಂದು ನಾ ಬರೆಯಲಿ....
ಹಚ್ಚ ಹಸಿರು ಮರಗಳಿಲ್ಲ ಇಲ್ಲಿ...
ಕಟ್ಟಡಗಳೇ ಬೆಳೆಯುತಿಹುದಿಲ್ಲಿ...
ಮರ-ಗಿಡಗಳು ಬೆಳೆಯಲು ಜಾಗವೆಲ್ಲಿ...
ಹೀಗೆಯೇ ಮುಂದುವರಿದಲ್ಲಿ...
ಪರಿಣಾಮವ ಮಾನವನೇ ಅನುಭವಿಸಲಿ...

ಸಂಪೂರ್ಣ ಮರೆಯಾದಾಗ ಹಸಿರು...
ನಿಲ್ಲುವುದು ಮಾನವನ ಉಸಿರು...
ಎಷ್ಟೇ ಬಾಯಾರಿಕೆಯಾದರೂ...
ಕುಡಿಯಲು ಸಿಗದು ತೊಟ್ಟು ನೀರು...

ತಿನ್ನಲು ಸಿಗದು ಆಹಾರ...
ಎಲ್ಲೆಡೆ ಏಳುವುದು ಹಾಹಾಕಾರ...
ವಿಜ್ಞಾನಿಗಳು ನಡೆಸುತ್ತಿಹರು ಸಂಶೋಧನೆ...
ಏನೇ ಆದರೂ, ಮೂಲ ಪ್ರಕೃತಿ ತಾನೇ?...

ಕಂಡರೂ ಎಷ್ಟೇ ಬೆಳವಣಿಗೆ...

ಗೆಲ್ಲಲಾಗಲಿಲ್ಲ ಈವರೆಗೆ ...
ಅತಿಯಾಸೆ ಈ ಮಾನವಗೆ...
ಮಿತಿಯಿಲ್ಲ ಆ ಅತಿಯಾಸೆಗೆ...
ಭೇದಿಸ ಹೊರಟರೆ ಪ್ರಕೃತಿಯ ರಹಸ್ಯ...
ಖಂಡಿತ ಸರ್ವನಾಶವಾಗುವ ಈ ಮನುಷ್ಯ...

ಇಂತಿ,
ನಾಗೇಶ್ ... :)

Wednesday 23 July 2014

> ಹಿತನುಡಿ- 3


ಪ್ರೀತಿ ಮಧುರ, ತ್ಯಾಗ ಅಮರ
ಎಂದರು ಭಟ್ಟರು ಮುಂಗಾರು ಮಳೆಯಲ್ಲಿ...
ಪ್ರೀತಿಯ ತೀರ ಆದಾಗ ದೂರ
ಮನವು ಮುಳುಗುವುದು ದುಃಖದ ಕಡಲಲ್ಲಿ...

ಹೃದಯದ ಪ್ರೀತಿ ದೂರವಾದಾಗ
ಬಯಸುವುದೀ ಮನ ಏಕಾಂತ....
ಬೇಸರದಿ ಕಡಲ ತಟದಲ್ಲಿ ಕುಳಿತಾಗ
ಕಾಣುವುದು ಸಾಗರದ ಅಲೆಗಳ ಮೊರೆತ...

ಸಾಗರದ ಅಲೆಗಳ ಸರದಿ
ಹೇಳುವುದು ನಮಗೆಲ್ಲ ಹಿತನುಡಿ...
ಅಲೆಗಳು ಬಂದು ಹೋದಂತೆ
ಶುಚಿಯಾಗುವುದು ತಟದ ಕಲ್ಮಶ...

ಈ ಜೀವನವೂ ಅದರಂತೆ
ಬರುವುದು ಒಂದಾದ ಮೇಲೊಂದು ಕಷ್ಟ...
ಎಲ್ಲ ಕಷ್ಟಗಳ ಎದುರಿಸಿದಂತೆ
ನಿನ್ನ ಮನವಾಗುವುದು ಬಲಿಷ್ಠ...

ಕೆಲವೊಮ್ಮೆ ಅಪ್ಪಳಿಸಿದಾಗ ಅಲೆಗಳು
ದಡಕ್ಕೆ ಬಂದು ಬೀಳುವ ಅದೆಷ್ಟೋ ವಸ್ತುಗಳು...
ಹಾಗೆಯೇ,
ಕಣ್ಣೀರು ಬರಿಸುವ ಕಹಿ ನೆನಪುಗಳು...
ಮುಗುಳ್ನಗು ತರಿಸುವ ಸಿಹಿ ನೆನಪುಗಳು...

ಸುಖ ಬಂದಾಗ ಹಿಗ್ಗದಿರು...
ಕಷ್ಟ ಬಂದಾಗ ಕುಗ್ಗದಿರು...
ಏನೇ ಕಷ್ಟ ಬಂದರೂ ಎದುರಿಸು...
ನಿನ್ನ ಗೆಲುವನ್ನು ಸಾಧಿಸು...

ಬೇವು- ಬೆಲ್ಲದಂತೆ ನಮ್ಮ ಜೀವನ...
ನೋವು-ನಲಿವಿನ ಸಮಾಗಮ...
ಏನೇ ಆದರೂ ಖುಷಿಪಡು ಅನುದಿನ...
ಕಷ್ಟ ಬಂದಾಗ ಪ್ರಾರ್ಥಿಸು ಆ ಭಗವಂತನ...

ಭಗವಂತನೊಬ್ಬ ಎಲ್ಲವನ್ನು ಮೇಲಿನಿಂದ ನೋಡುವನು..
ಕಷ್ಟ-ಸುಖಗಳ ತಕ್ಕಡಿಯ ಸರಿಯಾಗಿ ತೂಗುವನು...
ನೀಡುವನು ಕಷ್ಟ-ಸುಖದ ಸರಿಯಾದ ಪಾಲು...
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು....

ಇಂತಿ,
ನಾಗೇಶ್ ... :)

Tuesday 15 July 2014

> ಆಧುನಿಕ ಜಗತ್ತು...


ಈ ಬೃಹತ್ ಜಗದಲ್ಲಿ ಹುಲುಕಡ್ಡಿ ಈ ಮಾನವ...
ಪ್ರಗತಿಯ ಭರದಲ್ಲಿ ಅವನತಿಯತ್ತ ಸಾಗುತಿರುವ...
ಕೆಲ ವರ್ಷಗಳ ಹಿಂದೆ.. ಮಾನವನಿಗಿತ್ತು ಏನೇನೋ ಕಲ್ಪನೆ
ಆದರೆ ಇಂದು ಇದೆ.. ಎಲ್ಲ ಕಣ್ಣ ಮುಂದೆನೇ

ಅತಿಯಾಯ್ತು ಈ ಮಾನವನ...
ಮುಂದುವರಿದ ತಂತ್ರಜ್ಞಾನ...
ಮುಂದುವರಿಯುತ್ತಾ ಕಳೆದುಕೊಳ್ಳುತ್ತಿದ್ದಾನೆ
ತನ್ನದೇ ಸ್ವಂತಿಕೆಯನ್ನ..

ಮಾನವ ಪೂರೈಸಿಕೊಳ್ಳಲು ತನ್ನ ಆಸೆಯನ್ನು
ಕಡಿಯುತ್ತಾ ಬಂದ ಸುಂದರ ಕಾಡನ್ನು
ಹೀಗೆಯೇ ಮುಂದುವರಿದರೆ..
ನಾಶವಾಗುವುದು ಜೀವ ಸಂಕುಲ
ಪ್ರಕೃತಿ ಸಮತೋಲನ ತಪ್ಪಿದರೆ
ಉಂಟಾಗುವುದು ಅಲ್ಲೋಲ ಕಲ್ಲೋಲ

ಬೆಳೆಯುತ್ತಿದ್ದಾನೆ ಯಂತ್ರ ಮಾನವ
ಹುಟ್ಟು ಹಾಕಿರುವುದು ಈ ಹುಲು ಮಾನವ
ಅದಕೆ ಬೇಕಾದ ಶಕ್ತಿಯನ್ನೆಲ್ಲ ಕೊಡುವ
ತನ್ನ ಅಂತ್ಯಕ್ಕೆ ಮುಹೂರ್ತ ಮಾಡಿರುವ

ಈ ಆಧುನಿಕ ಲೋಕದಲ್ಲಿ
ಬದಲಾಗಿದೆ ಜೀವನ ಶೈಲಿ
ಪ್ರಕೃತಿಯನ್ನು ಎದುರು ಹಾಕಿಕೊಂಡಲ್ಲಿ
ಮಾನವನಿಗಿಲ್ಲ ಉಳಿಗಾಲವಿಲ್ಲಿ

ಪ್ರಯತ್ನ ಪಡುತಿರುವನು ಸಾವನ್ನು ಗೆಲ್ಲಲು
ಆದರದು ಸಾಧ್ಯವಾಗದು ಯಾರಿಂದಲೂ
ಹೀಗೆ ಮುಂದುವರಿದರೆ ತಂತ್ರಜ್ಞಾನ.. ಒಂದಲ್ಲ ಒಂದು ದಿನ..
ಕಾಣಬಹುದು ಮಾನವನ.. ದುರಂತ ಅವಸಾನ...

ಇಂತಿ,
ನಾಗೇಶ್ ... :)

Sunday 6 July 2014

> ಗುಂಡನ ಕಥೆ ....


ಕಾಲೇಜಿನಲ್ಲಿ ಓದುವ ಗುಂಡ
ಸಿಗರೇಟು ಸೇದುವ ಅಭ್ಯಾಸ ಮಾಡಿಕೊಂಡ
ಇದ ಕಂಡ ಪ್ರಿನ್ಸಿಪಾಲರು
ಕರೆದು ಬುದ್ಧಿ ಹೇಳಿದರು...

ಯಾರೇನೆ ಅಂದರೂ
ಬಿಡಲಿಲ್ಲ ಗುಂಡ ಸಿಗರೇಟನ್ನು
ಅದಕ್ಕೆ ಪ್ರಿನ್ಸಿಪಾಲರು
ಕರೆಸಿದರು ಗುಂಡನ ತಂದೆಯನ್ನು....

ಈ ನಮ್ಮ ಪ್ರಿನ್ಸಿಪಾಲರು
ಗುಂಡನ ತಂದೆಯನ್ನು ಕೇಳಿದರು
ನಿಮ್ಮ ಮಗ ಸಿಗರೇಟು ಸೇದುವನು
ನೀವದನ್ನು ಕೇಳಲ್ವೇನು??

ಅದಕೆ ಗುಂಡನ ತಂದೆ :
ನಾನು ಬಹಳ ಸಲ ಕೇಳಿರುವೆನು
ಕೇಳಿ ಕೇಳಿ ಸುಸ್ತಾಗಿರುವೆನು
ಎಷ್ಟೇ ಕೇಳಿದರೂನೂ
ನಂಗೆ ಕೊಡಲ್ಲ ಅಂತಾನೆ ಅವನು...!!!!


ಇಂತಿ,
ನಾಗೇಶ್ .. :)