Tuesday 16 September 2014

> ಬಾಳೆಂಬ ನಾಟಕ

ಬದುಕೆಂಬುದೊಂದು ನಾಟಕ...
ನಿನ್ನ ನಾಟಕಕೆ ನೀನೆ ನಾಯಕ...
ನಿಷ್ಠೆಯಿಂದ ಮಾಡು ನಿನ್ನ ಕಾಯಕ...
ಆಗುವೆ ನೀನೊಬ್ಬ ಮಹಾನ್ ಸಾಧಕ...

ಜೀವನದಲಿ ಆರೋಗ್ಯವಾಗಿರಬೇಕೆಂದರೆ...
ಸರಿಯಾಗಿ ಮಾಡು ಊಟ-ನಿದ್ರೆ...
ಒದ್ದಾಡಬೇಡ ದಿನವಿಡೀ...
ಕಳೆದುಕೊಳ್ಳುವೆ ಬದುಕಲಿ ನೆಮ್ಮದಿ...

ಹಿರಿಯರು ಹೇಳಿದ್ದಾರೆ...
ಶಕ್ತಿಗಿಂತ ಯುಕ್ತಿ ಮೇಲು...
ಬುದ್ಧಿಯನು ಉಪಯೋಗಿಸಿದರೆ...
ನಿನ್ನದಾಗುವುದು ಗೆಲುವು...

ಎಲ್ಲರನು ಪ್ರೀತಿಸು...
ಎಲ್ಲರಿಗೂ ಪ್ರೀತಿ ಕೊಡು...
ಪರರ ಕಷ್ಟವ ಆಲಿಸು...
ಆಲಿಸಿ ಕೈಲಾದ ಸಹಾಯ ಮಾಡು...

ನೀ ಮಾಡುವ ಒಂದು ಉಪಕಾರ...
ಪರರ ಜೀವನಕಾಗಬಹುದು ಆಧಾರ...
ಅವರ ಸಮಸ್ಯೆಗೆ ಸಿಕ್ಕರೆ ಪರಿಹಾರ...
ಸಾರ್ಥಕವು ನಿನ್ನ ಪರೋಪಕಾರ...

ಮನದಲ್ಲಿ ನಗುವಿರಲಿ...


ಇಂತಿ,
ನಾಗೇಶ್ :) ....

Monday 8 September 2014

> ಪ್ರಕೃತಿ ನಾಶ ...

ಈ ಮಳೆಗಾಲದೊಳು....
ಕಪ್ಪೇರುವುದು ಮುಗಿಲು...
ಬಡಿದಾಗ ಗುಡುಗು ಸಿಡಿಲು...
ಅತ್ತಿತ್ತ ಓಡಾಡುವ ಪುಟ್ಟ ಅಳಿಲು...
ಮೊದಲ ಮಳೆ ಹನಿ ಧರೆಗೆ ತಾಕಲು..
ಮಳೆಗೆ ಮುಖವೊಡ್ಡುವ ಆಸೆ ಮನದೊಳು...

ಮಳೆಗಾಲದಲಿ ಈ ಧರೆ...
ಉಡುವುದು ಹಸಿರು ಸೀರೆ...
ಎಲ್ಲೆಲ್ಲೂ ಕಾಣುವ ಹಚ್ಚ ಹಸಿರು..
ಭೂಮಂಡಲದ ಜೀವಿಗಳಿಗೆ ಇದೇ ಉಸಿರು...
ನಾಶಗೊಂಡರೆ ಈ ಹಸಿರು...
ನಿಲ್ಲುವುದು ಎಲ್ಲರ ಉಸಿರು...
ಎಲೈ ದುರುಳ ಸ್ವಾರ್ಥಿ ಮಾನವನೇ...
ನಿನ್ನ ನಾಶಕೆ ಮುನ್ನುಡಿ ಬರೆದಿರುವೆ ನೀನೆ...
ಪೂರೈಸಲು ಸಿರಿವಂತನಾಗುವ ನಿನ್ನ ಆಸೆಯ...
ಬಲಿಕೊಡಬೇಕೆ ಈ ಪ್ರಕೃತಿಯ ??


ಇಂತಿ,
ನಾಗೇಶ್ :) ...

Friday 5 September 2014

> ಮಲೆನಾಡ ಹಸಿರು

ಈ ಬೃಹತ್ ಬ್ರಹ್ಮಾಂಡದೊಳು...
ಅಸಂಖ್ಯಾತ ಜೀವಿಗಳು...
ಒಂದೊಂದು ಜೀವಿಯಲ್ಲೂ...
ಬಹಳಷ್ಟು ವಿಶೇಷತೆಗಳು...

ಮುಂಜಾನೆಯಲಿ ನಿದ್ದೆಯಿಂದ ಎದ್ದಾಗ...
ಕೇಳುವುದು ಕೋಗಿಲೆಯ ಕುಹೂ ಕುಹೂ ರಾಗ...
ಕೋಗಿಲೆಯ ಗಾನದೊಡನೆ...
ಇದ್ದರೆ ನವಿಲಿನ ನರ್ತನೆ...
ನೋಡುತಿರಲು ಮೆಲ್ಲನೆ...
ಸೆಳೆಯಬಲ್ಲುದು ಎಲ್ಲರ ಗಮನವನೆ...

ಹಟ್ಟಿಯಿಂದ ಹೊರಬರುವ ಆಕಳು...
ಅವುಗಳ ಹಿಂದೆಯೇ ಬರುವ ಪುಟ್ಟ ಕರುಗಳು...
ಇಂಥ ದೃಶ್ಯ ಪಟ್ಟಣದಲಿ ಸಿಗದು..
ಅದಕೆ ಹೋಗಬೇಕು ಕರಾವಳಿ-ಮಲೆನಾಡು...

ಅಲ್ಲಿ ಬೆಳೆದು ನಿಂತಿರುವುದು ಹಸಿರು ಪೈರು...
ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರು...
ಸಿಗುವುದಲ್ಲಿ ಶುದ್ಧ ಗಾಳಿ-ನೀರು...
ಪ್ರಸಿದ್ಧವಿಲ್ಲಿ ನಾಟಿ ಕೋಳಿ ಸಾರು...


ಇಂತಿ,
ನಾಗೇಶ್ :) ...