Monday 25 August 2014

> ಹಿತನುಡಿ - 4

ಕೋಟಿ ಕಿರಣಗಳ ಒಡೆಯ...
ಭೂಮಿಗೆ ಬೆಳಕ ಕೊಡುವ ಸೂರ್ಯ...
ಅವನುದಯವಾಗುವುದು ಅನುದಿನ...
ಬೆಳಗುವನು ಭೂಮಿಯ ಕಣ ಕಣ...

ದಿನವಿಡೀ ಮಾಡಿ ಕೆಲಸವ...
ಬಳಲಿ ಬೆಂಡಾಗುವ ಮಾನವ...
ದಿನಾಂತ್ಯಕ್ಕೆ ವಿಶ್ರಾಂತಿಯ ಬಯಸುವನು...
ಅದಕಾಗಿ ನಿದ್ದೆಯ ಮೊರೆ ಹೋಗುವನು...

ಉದಯಿಸುತ್ತಿದ್ದಂತೆ ಸೂರ್ಯ ಬಾನಲ್ಲಿ...
ಕೇಳುವುದು ಹಕ್ಕಿಗಳ ಚಿಲಿಪಿಲಿ...
ಕಣ್ಣ ಮೇಲೆ ಬೀಳಲು ಸೂರ್ಯನ ಕಿರಣ...
ತೆರೆಯಲಾಗದು ನಮ್ಮ ನಯನ...
ಮೆಲ್ಲನೆ ತೆರೆದು ಅರ್ಧ ಕಣ್ಣನ್ನ...
ವಾಪಾಸು ಮಲಗುವೆವು ನೋಡಿ ಸಮಯವನ್ನ...

ಬಿಡು ನೀ ಹಾಳು  ಆಲಸ್ಯ...
ಎದ್ದು ಮಾಡು ನಿನ್ನಯ ಕೆಲಸ...
ಪ್ರತಿಯೊಂದರಲ್ಲೋ ಇರುವುದು ಸ್ವಾರಸ್ಯ...
ತಿಳಿದರೆ ಪಡುವೆ ನೀ ಸಂತಸ...
ಪ್ರತಿಯೊಂದರಲ್ಲೂ ಹುಡುಕು ಹೊಸತೊಂದನ್ನು..
ಆಗ ಇಷ್ಟಪದುವೆ ನಿನ್ನ ಜೀವನವನ್ನು..
ನಿನ್ನ ಜೀವನ ನಿನಗಾದರೆ ಇಷ್ಟ...
ಸಾಗಿಸಲು ಜೀವನವಾಗದು ಕಷ್ಟ..

ಇಷ್ಟವಾದುದನ್ನು ಬಿಡದಿರು..
ಕಷ್ಟ ಬಂದಾಗ ಮನಸೋಲದಿರು...
ತಂದುಕೊಂಡರೆ ಸ್ವಲ್ಪ ಧೈರ್ಯ...
ಸಾಧಿಸಬಹುದು ನಿನ್ನ ಕಾರ್ಯ..

ಇಂತಿ,
ನಾಗೇಶ್ :) ....

No comments:

Post a Comment