Wednesday 23 July 2014

> ಹಿತನುಡಿ- 3


ಪ್ರೀತಿ ಮಧುರ, ತ್ಯಾಗ ಅಮರ
ಎಂದರು ಭಟ್ಟರು ಮುಂಗಾರು ಮಳೆಯಲ್ಲಿ...
ಪ್ರೀತಿಯ ತೀರ ಆದಾಗ ದೂರ
ಮನವು ಮುಳುಗುವುದು ದುಃಖದ ಕಡಲಲ್ಲಿ...

ಹೃದಯದ ಪ್ರೀತಿ ದೂರವಾದಾಗ
ಬಯಸುವುದೀ ಮನ ಏಕಾಂತ....
ಬೇಸರದಿ ಕಡಲ ತಟದಲ್ಲಿ ಕುಳಿತಾಗ
ಕಾಣುವುದು ಸಾಗರದ ಅಲೆಗಳ ಮೊರೆತ...

ಸಾಗರದ ಅಲೆಗಳ ಸರದಿ
ಹೇಳುವುದು ನಮಗೆಲ್ಲ ಹಿತನುಡಿ...
ಅಲೆಗಳು ಬಂದು ಹೋದಂತೆ
ಶುಚಿಯಾಗುವುದು ತಟದ ಕಲ್ಮಶ...

ಈ ಜೀವನವೂ ಅದರಂತೆ
ಬರುವುದು ಒಂದಾದ ಮೇಲೊಂದು ಕಷ್ಟ...
ಎಲ್ಲ ಕಷ್ಟಗಳ ಎದುರಿಸಿದಂತೆ
ನಿನ್ನ ಮನವಾಗುವುದು ಬಲಿಷ್ಠ...

ಕೆಲವೊಮ್ಮೆ ಅಪ್ಪಳಿಸಿದಾಗ ಅಲೆಗಳು
ದಡಕ್ಕೆ ಬಂದು ಬೀಳುವ ಅದೆಷ್ಟೋ ವಸ್ತುಗಳು...
ಹಾಗೆಯೇ,
ಕಣ್ಣೀರು ಬರಿಸುವ ಕಹಿ ನೆನಪುಗಳು...
ಮುಗುಳ್ನಗು ತರಿಸುವ ಸಿಹಿ ನೆನಪುಗಳು...

ಸುಖ ಬಂದಾಗ ಹಿಗ್ಗದಿರು...
ಕಷ್ಟ ಬಂದಾಗ ಕುಗ್ಗದಿರು...
ಏನೇ ಕಷ್ಟ ಬಂದರೂ ಎದುರಿಸು...
ನಿನ್ನ ಗೆಲುವನ್ನು ಸಾಧಿಸು...

ಬೇವು- ಬೆಲ್ಲದಂತೆ ನಮ್ಮ ಜೀವನ...
ನೋವು-ನಲಿವಿನ ಸಮಾಗಮ...
ಏನೇ ಆದರೂ ಖುಷಿಪಡು ಅನುದಿನ...
ಕಷ್ಟ ಬಂದಾಗ ಪ್ರಾರ್ಥಿಸು ಆ ಭಗವಂತನ...

ಭಗವಂತನೊಬ್ಬ ಎಲ್ಲವನ್ನು ಮೇಲಿನಿಂದ ನೋಡುವನು..
ಕಷ್ಟ-ಸುಖಗಳ ತಕ್ಕಡಿಯ ಸರಿಯಾಗಿ ತೂಗುವನು...
ನೀಡುವನು ಕಷ್ಟ-ಸುಖದ ಸರಿಯಾದ ಪಾಲು...
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು....

ಇಂತಿ,
ನಾಗೇಶ್ ... :)

No comments:

Post a Comment