Tuesday 16 September 2014

> ಬಾಳೆಂಬ ನಾಟಕ

ಬದುಕೆಂಬುದೊಂದು ನಾಟಕ...
ನಿನ್ನ ನಾಟಕಕೆ ನೀನೆ ನಾಯಕ...
ನಿಷ್ಠೆಯಿಂದ ಮಾಡು ನಿನ್ನ ಕಾಯಕ...
ಆಗುವೆ ನೀನೊಬ್ಬ ಮಹಾನ್ ಸಾಧಕ...

ಜೀವನದಲಿ ಆರೋಗ್ಯವಾಗಿರಬೇಕೆಂದರೆ...
ಸರಿಯಾಗಿ ಮಾಡು ಊಟ-ನಿದ್ರೆ...
ಒದ್ದಾಡಬೇಡ ದಿನವಿಡೀ...
ಕಳೆದುಕೊಳ್ಳುವೆ ಬದುಕಲಿ ನೆಮ್ಮದಿ...

ಹಿರಿಯರು ಹೇಳಿದ್ದಾರೆ...
ಶಕ್ತಿಗಿಂತ ಯುಕ್ತಿ ಮೇಲು...
ಬುದ್ಧಿಯನು ಉಪಯೋಗಿಸಿದರೆ...
ನಿನ್ನದಾಗುವುದು ಗೆಲುವು...

ಎಲ್ಲರನು ಪ್ರೀತಿಸು...
ಎಲ್ಲರಿಗೂ ಪ್ರೀತಿ ಕೊಡು...
ಪರರ ಕಷ್ಟವ ಆಲಿಸು...
ಆಲಿಸಿ ಕೈಲಾದ ಸಹಾಯ ಮಾಡು...

ನೀ ಮಾಡುವ ಒಂದು ಉಪಕಾರ...
ಪರರ ಜೀವನಕಾಗಬಹುದು ಆಧಾರ...
ಅವರ ಸಮಸ್ಯೆಗೆ ಸಿಕ್ಕರೆ ಪರಿಹಾರ...
ಸಾರ್ಥಕವು ನಿನ್ನ ಪರೋಪಕಾರ...

ಮನದಲ್ಲಿ ನಗುವಿರಲಿ...


ಇಂತಿ,
ನಾಗೇಶ್ :) ....

No comments:

Post a Comment