Monday 8 September 2014

> ಪ್ರಕೃತಿ ನಾಶ ...

ಈ ಮಳೆಗಾಲದೊಳು....
ಕಪ್ಪೇರುವುದು ಮುಗಿಲು...
ಬಡಿದಾಗ ಗುಡುಗು ಸಿಡಿಲು...
ಅತ್ತಿತ್ತ ಓಡಾಡುವ ಪುಟ್ಟ ಅಳಿಲು...
ಮೊದಲ ಮಳೆ ಹನಿ ಧರೆಗೆ ತಾಕಲು..
ಮಳೆಗೆ ಮುಖವೊಡ್ಡುವ ಆಸೆ ಮನದೊಳು...

ಮಳೆಗಾಲದಲಿ ಈ ಧರೆ...
ಉಡುವುದು ಹಸಿರು ಸೀರೆ...
ಎಲ್ಲೆಲ್ಲೂ ಕಾಣುವ ಹಚ್ಚ ಹಸಿರು..
ಭೂಮಂಡಲದ ಜೀವಿಗಳಿಗೆ ಇದೇ ಉಸಿರು...
ನಾಶಗೊಂಡರೆ ಈ ಹಸಿರು...
ನಿಲ್ಲುವುದು ಎಲ್ಲರ ಉಸಿರು...
ಎಲೈ ದುರುಳ ಸ್ವಾರ್ಥಿ ಮಾನವನೇ...
ನಿನ್ನ ನಾಶಕೆ ಮುನ್ನುಡಿ ಬರೆದಿರುವೆ ನೀನೆ...
ಪೂರೈಸಲು ಸಿರಿವಂತನಾಗುವ ನಿನ್ನ ಆಸೆಯ...
ಬಲಿಕೊಡಬೇಕೆ ಈ ಪ್ರಕೃತಿಯ ??


ಇಂತಿ,
ನಾಗೇಶ್ :) ...

No comments:

Post a Comment