ಸೇರಿದರೆ
ರಾಜಕಾರಣ
ಮಾಡಬಹುದು
ಬೇಕಾದಷ್ಟು ಹಣ
ಅದಕಾಗಿ
ಚುನಾವಣೆಯಲ್ಲಿ ತೊಡುವರು ಪಣ
ಅದಕಾಗಿ ಖರ್ಚು
ಮಾಡುವರು ತಮ್ಮೆಲ್ಲಾ ಹಣ
ಗೆದ್ದರೆ
ಕುರ್ಚಿಗೇರುವರು...
ಸೋತರೆ ಬೀದಿಗೆ
ಬೀಳುವರು...
ಚುನಾವಣೆಗೆ
ಹಂಚುವರು ಹೆಂಡ –
ಸಾರಾಯಿ
ಅದಕೆ ಮರುಳಾಗುವ
ಬಡವ ಬಡಪಾಯಿ
ಮಹಿಳೆಯರಿಗೆ
ಹಂಚುವರು ಸೀರೆ –
ರವಿಕೆ
ಈ ಎಲ್ಲಾ ತಂತ್ರ
ಚುನಾವಣೆ ಗೆಲ್ಲೋಕೆ....
ನೀವು ಹಾಕಿದ ಮೇಲೆ
ವೋಟು..
ಬೆರಳಿಗೆ
ಹಾಕುವರೊಂದು ಡಾಟು....
ಹಾಕಿ ನಿಮ್ಮ ಮತ.. ಸರಿಯಾದ
ಅಭ್ಯರ್ಥಿಗೆ...
ಲಂಚ ಕೊಟ್ಟರಂತ.. ಸೋಲಬೇಡಿ
ಭ್ರಷ್ಟರಿಗೆ...
ರಾಜಕಾರಣವೊಂದು
ಚದುರಂಗ
ಭ್ರಷ್ಟರ
ಹೆಸರಾಗಬೇಕು ಬಹಿರಂಗ
ತೊಲಗಿದಾಗ
ಭ್ರಷ್ಟಾಚಾರದ ಅನಿಷ್ಟ
ದೇಶವಾಗುವುದು
ಬಲಿಷ್ಠ....
ಜೈ ಹಿಂದ್ ....
ಇಂತಿ,
ನಾಗೇಶ್ :)
No comments:
Post a Comment