Sunday, 27 April 2014

> ಮೂಢನಂಬಿಕೆ...

ಒಳ್ಳೆಯ ಕೆಲಸಕ್ಕೆ ಹೋಗುವಾಗ..
ಖುಷಿಯಿಂದ ಹೊರಟಾಗ...
ಅಡ್ಡ ಬಂದರೆ ಬೆಕ್ಕು
ಹೇಳುವರು ಅಪಶಕುನ...
ಹೇಗೆಯೇ ಎಲ್ಲಾದಕ್ಕೂ
ಹುಡುಕುವರು ಒಂದೊಂದು ಕಾರಣ....

ಮಹಾ ಲೇಖಕ ಗೋವಿಂದ
ಬರೆದ ಪುಸ್ತಕವೊಂದ...
ಮೂಢನಂಬಿಕೆಯ ವಿರೋಧಿಸಿ
ಅದರ ಕಾರಣಗಳ ತಿಳಿಸಿ...
ಪುಸ್ತಕ ಮುದ್ರಣಕೆ ಹೊರಟ ಗೋವಿಂದ
ಅರ್ಧ ದಾರಿಗೆ ವಾಪಾಸು ಬಂದ...
ಕಾರಣ ಏನಾಗಿತ್ತು ?
ದಾರಿಯಲ್ಲಿ ಬೆಕ್ಕು ಅಡ್ಡ ಬಂದಿತ್ತು....

ಇಂತಿ,
ನಾಗೇಶ್..  :)

No comments:

Post a Comment