ಯಾರದೋ ಮೇಲಿನ
ಮುನಿಸು
ಏಕಾಂತ
ಬಯಸುತಿದೆ ಮನಸು
ಶಾಂತಸಾಗರದಿ
ಸಾಗುವ ಹಡಗಂತಿತ್ತು ಗೆಳೆತನ
ಈಗ ಸುನಾಮಿಗೆ
ಸಿಕ್ಕ ದೋಣಿಯಂತಾಗಿದೆ ಜೀವನ
ಮನದ ಸಾಗರದಿ
ಎದ್ದಿದೆ ಭಿನ್ನಾಭಿಪ್ರಾಯದ ಸುನಾಮಿ
ಎಲ್ಲವ ಮನದಲ್ಲೇ
ಇಟ್ಟುಕೊಂಡರೆ ವಿರಸವಾಗದು ಕಮ್ಮಿ
ಸಮಾಧಾನದಿಂದ
ಕುಳಿತು ಮಾತನಾಡಿ
ಮನದಲ್ಲಿರುವುದೆಲ್ಲವ
ಹೊರಗೆ ದೂಡಿ
ಹರಿಯಲಿ
ಬೇಕಾದರೆ ಕಣ್ಣೀರ ಕೋಡಿ
ಆಮೇಲೆ ನೋಡಿ
ಮೊದಲಿನಂತಾಗುವುದು
ಗೆಳೆತನದ ಜೋಡಿ
ಇದೇ
ಗೆಳೆತನದಲ್ಲಿರೋ ಮೋಡಿ ......
ಇಂತಿ,
ನಾಗೇಶ್ ... :)
No comments:
Post a Comment