Monday 16 June 2014

> ಆಸೆ....

ಆಸೆ ಆಸೆ ಆಸೆ....
ಆಸೆ ತರುವುದು ನಿರಾಸೆ...
ಈಗಿರುವ ಚಿಕ್ಕ ಆಸೆ...
ಮುಂದಾಗಬಹುದು ದುರಾಸೆ...
ಕಾಲವಿದು ಕಲಿಗಾಲ...
ಗೆಲ್ಲುವುದು ಸುಲಭವಲ್ಲ...

ದುರಾಸೆಗೆ ಕಾರಣವೇನು...??
ಆ ಭಗವಂತನೇ ಹೇಳಿರುವನು...
ಅದು ಹೆಣ್ಣು, ಹೊನ್ನು, ಮಣ್ಣು....
ಅದೆಂದೂ ಬದಲಾಗದಿನ್ನು...
ರಾಮಾಯಣಕೆ ಕಾರಣ ಹೆಣ್ಣು..
ಕುರುಕ್ಷೇತ್ರಕ್ಕೆ ಕಾರಣ ಮಣ್ಣು...

ಒಂಥರಾ ಹುಳಿಹಣ್ಣು...
ಈ ಹೆಣ್ಣು, ಹೊನ್ನು, ಮಣ್ಣು...
ಹೆಚ್ಚು ಪಡೆಯಲು ಹೋಗಿ ಈ ಮೂರನ್ನು...
ವ್ಯರ್ಥ ಮಾಡಬೇಡಿ ನಿಮ್ಮ ಸಮಯವನ್ನು

ಇದಕೆ ಅತಿಯಾಸೆ ಪಟ್ಟವರು...
ಇಂದು ಜೈಲಿಗೆ ಹೋಗಿಹರು...
ದುಡಿದರೆ ಹರಿಸಿ ಬೆವರು...
ಜೀವನದಲ್ಲಿ ಉನ್ನತಿ ಪಡೆಯುವರು...


ಇಂತಿ,
ನಾಗೇಶ್ ... :)

No comments:

Post a Comment