ಆಸೆ ಆಸೆ ಆಸೆ....
ಆಸೆ ತರುವುದು
ನಿರಾಸೆ...
ಈಗಿರುವ ಚಿಕ್ಕ
ಆಸೆ...
ಮುಂದಾಗಬಹುದು
ದುರಾಸೆ...
ಕಾಲವಿದು
ಕಲಿಗಾಲ...
ಗೆಲ್ಲುವುದು
ಸುಲಭವಲ್ಲ...
ದುರಾಸೆಗೆ
ಕಾರಣವೇನು...??
ಆ ಭಗವಂತನೇ
ಹೇಳಿರುವನು...
ಅದು ಹೆಣ್ಣು,
ಹೊನ್ನು, ಮಣ್ಣು....
ಅದೆಂದೂ ಬದಲಾಗದಿನ್ನು...
ರಾಮಾಯಣಕೆ ಕಾರಣ
ಹೆಣ್ಣು..
ಕುರುಕ್ಷೇತ್ರಕ್ಕೆ
ಕಾರಣ ಮಣ್ಣು...
ಒಂಥರಾ
ಹುಳಿಹಣ್ಣು...
ಈ ಹೆಣ್ಣು,
ಹೊನ್ನು, ಮಣ್ಣು...
ಹೆಚ್ಚು ಪಡೆಯಲು ಹೋಗಿ ಈ
ಮೂರನ್ನು...
ವ್ಯರ್ಥ
ಮಾಡಬೇಡಿ ನಿಮ್ಮ ಸಮಯವನ್ನು
ಇದಕೆ ಅತಿಯಾಸೆ
ಪಟ್ಟವರು...
ಇಂದು ಜೈಲಿಗೆ
ಹೋಗಿಹರು...
ದುಡಿದರೆ ಹರಿಸಿ
ಬೆವರು...
ಜೀವನದಲ್ಲಿ ಉನ್ನತಿ
ಪಡೆಯುವರು...
ಇಂತಿ,
ನಾಗೇಶ್ ... :)
No comments:
Post a Comment