Monday 23 June 2014

> ಮನದಾಸೆ...


ಜಗವೊಂದು ಚೆಂಡು....
ಆಗಿಹುದು ಗುಂಡು...
ಅದ ಮಾಡಿ ತುಂಡು ತುಂಡು...
ಎಲ್ಲರೂ ಹೇಳುವರು ತಮ್ಮದೆಂದು....

ಅದ ಮಾರುವರು ಹಣವ ಕೊಂಡು..
ಇನ್ಯಾರೋ ಅದನ್ನು ತೆಗೆದುಕೊಂಡು...
ಮನೆಯೊಂದ ಕಟ್ಟಬೇಕೆಂದುಕೊಂಡು...
ಮೈತುಂಬಾ ಸಾಲವ ಮಾಡಿಕೊಂಡು...
ಆ ಸಾಲದಿಂದ ಮನೆಯ ಕಟ್ಟಿಕೊಂಡು...
ಸಾಲದಿಂದಾಗಿ ನೆಮ್ಮದಿ ಕಳೆದುಕೊಂಡು...
ಬರಡಾಗುವುದೀ ಹಾಳು ಜೀವನ...
ಮನದ ಆಸೆಯೇ ಇದಕೆಲ್ಲ ಕಾರಣ....


ಬುದ್ಧನೆಂದಿಹನು ... ಆಸೆಯೇ ದುಃಖಕ್ಕೆ ಮೂಲ....
ಹಾಗೆಂದು ಆಸೆಪಡಲೇಬಾರದಂತಲ್ಲ.....
ಕಾಲು ಚಾಚು ನೀ ಹಾಸಿಗೆಯಿದ್ದಷ್ಟು...
ಅದರಲ್ಲೇ ತೃಪ್ತಿಪಡು ಸಾಗರದ ನೀರಷ್ಟು...


ಇಂತಿ,
ನಾಗೇಶ್ ... :)

No comments:

Post a Comment